ನಾನು ಪಕ್ಷೇತರನಾಗಿ ನಿಲ್ಲುವ ವಿಚಾರವಿತ್ತು, ಆದರೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನಾನು ಯಾವುದೇ ಪಕ್ಷದಲ್ಲಿದ್ದರೂ ಚುನಾವಣೆಯಲ್ಲಿ ಶಿಕ್ಷಕರು ನನ್ನ ಕೈಬಿಡಲ್ಲ ಎಂಬ ವಿಶ್ವಾಸ ನನಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಸಭಾಪತಿಯಾಗಿದ್ದರಿಂದ ನಾನು ಪಕ್ಷೇತರನಾಗಿ ನಿಲ್ಲುವ ವಿಚಾರವಿತ್ತು.ಆದರೆ ನೀವೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕೆಲವರು ಆಹ್ವಾನ ನೀಡಿದರು. ಕೆಲ ಚರ್ಚೆಗಳು ನಡೆದಿದೆ ಎಂದು ಬಿಜೆಪಿಗೆ ಸೇರಲು ಒಪ್ಪಿದೆ ಎಂದರು.
ಜೆಡಿಎಸ್ ನನ್ನ ಬೆಳೆಸಿದೆ. ಕರೆದು ಮಂತ್ರಿ ಮಾಡಿದ್ದು ಗೌಡರು. ಜೆಡಿಎಸ್ ಬಿಟ್ಟು ಹೋಗಿ ಎಂದು ನಾನು ಯಾರಿಗೂ ಹೇಳಿಲ್ಲ. ನನಗೆ ಬಿಜೆಪಿಯಿಂದ ಆಹ್ವಾನ ಬಂದಿದೆ ಈ ನಿಟ್ಟಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ.ಕುಮಾರಸ್ವಾಮಿ ಕೂಡ ಈ ಬಗ್ಗೆ ಸಮ್ಮತಿ ನೀಡಿದ್ದರು. ನಾನು ಯಾವ ಪಕ್ಷಕ್ಕೆ ಹೋದರೂ ಶಿಕ್ಷಕರು ನನ್ನ ಕೈ ಹಿಡಿಯುತ್ತಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!